breaking news

ಬಿಜೆಪಿ ಕಾರ್ಯದರ್ಶಿ ಶಕುಂತಲಾ ನಟರಾಜ್ ರವರ ಪುತ್ರ ಆತ್ಮಹತ್ಯೆ

ಬಿಜೆಪಿ ಕಾರ್ಯದರ್ಶಿ ಶಕುಂತಲಾ ನಟರಾಜ್ ರವರ ಪುತ್ರ ಆತ್ಮಹತ್ಯೆ

ತುಮಕೂರು: ನಗರದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ತುಮಕೂರು ನಗರದ ದೇವನೂರು ಚರ್ಚ್ ಬಳಿಯ ವಿಜಯನಗರದಲ್ಲಿ ವಾಸವಾಗಿದ್ದ ತುಮಕೂರು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣ ಮುಖ್ಯಸ್ಥರಾಗಿರುವ ಶಕುಂತಲಾ ನಟರಾಜ್ ರವರ ಪುತ್ರ ತ್ರಿಶಾಲ್ (13) ಸ್ಥಳೀಯ ಶಾಲೆಯೊಂದರಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು.

ಎಂದಿನಂತೆ ಶಾಲೆಗೆ ತೆರಳಿ ಮನೆಗೆ ವಾಪಸ್ ಆಗಿರುವ ಬಾಲಕ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಘಟನೆ ನಡೆದ ಕೂಡಲೇ ಶಕುಂತಲಾ ನಟರಾಜ್ ರವರ ಮನೆಗೆ ಹಲವು ಬಿಜೆಪಿ ನಾಯಕರು ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದರು.

ಘಟನಾ ಸ್ಥಳಕ್ಕೆ ಜಯನಗರ ಪೊಲೀಸ್ ಹಾಗೂ ಬೆರಳಚ್ಚು ತಂಡದ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

BJP secretary Shakuntala Nataraj’s son committed suicide

Share this post

About the author

Leave a Reply

Your email address will not be published. Required fields are marked *