ಇಂದಿನ ಯುವಕರು ಕ್ರೀಡೆಗಳಲ್ಲಿ ತೊಡಗಿಸಿಕೊಂಡರೆ ಮೊಬೈಲ್ ಚಟ ಡ್ರಕ್ಸ್ ವ್ಯಸನ ಮಧ್ಯಪಾನ ಧೂಮಪಾನ ಸೇರಿದಂತೆ ಇತರೆ ಅಮಲುಗಳಿಂದ ದೂರವಿದ್ದು ಗುಣಾತ್ಮಕ ಆರೋಗ್ಯವನ್ನು ವಂದಬಹುದು ಎಂದು ರಾಜೇಶ್ವರಿ ಯೂಥ್ ಕ್ಲಬ್ ನ ಕಾರ್ಯದರ್ಶಿ ಗಿರೀಶ್ ಅವರು ತಿಳಿಸಿದರು.
ಬೆಂಗಳೂರಿನ ರಾಜೇಶ್ವರಿ ವಿದ್ಯಾ ಶಾಲಾ ಟ್ರಸ್ಟ್ ರಾಜೇಶ್ವರಿ ಯೂಥ್ ಕ್ಲಬ್ ಕೆ ಆರ್.ಎಸ್. ಎವೆರಿ ಗ್ರೀನ್ ಸ್ಟ್ರಕ್ಚರ್ಸ್ ನ ಸಹಯೋಗದೊಂದಿಗೆ ಕೆಂಚೇನಹಳ್ಳಿ ಶ್ರೀ ರಾಜೇಶ್ವರಿ ಆಟದ ಮೈದಾನದಲ್ಲಿ ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಯುವಕರು ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಇಂದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನೇಕರು ಮೇಲ್ಮಟ್ಟದಲ್ಲಿದ್ದು ಇಂದಿನ ಯುವಕರು ಕೂಡ ವ್ಯಾಯಾಮ ಮತ್ತು ಕ್ರೀಡೆಯಲ್ಲಿ ತೊಡಗಿ ತಮ್ಮ ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ರಾಜೇಶ್ವರಿ ದೇವಾಲಯದ ರಾಜಶೇಖರ್ ಸ್ವಾಮಿ, ರಾಜೇಶ್ವರಿ ವಿದ್ಯಾ ಶಾಲಾ ಟ್ರಸ್ಟ್ ಗೋಪಾಲನ್, ಕೆಆರ್ಎಸ್ ಎವರಿ ಗ್ರೀನ್ ಇನ್ಫಾಸ್ಟ್ ಟೆಕ್ಚರ್ ನ ಮಧುಕುಮಾರ್ , ಬಿಸಿಬಿಬಿಐ ಜಗದೀಶ್ , ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಕುಮಾರ್, ಸೇರಿದಂತೆ ಇತರೆ ಗಣ್ಯರಿಂದ ಪಂದ್ಯಾವಳಿ ಉದ್ಘಾಟನೆಯಾಗಿದ್ದು ರಾಜ್ಯದ ವಿವಿಧಡೆಗಳಿಂದ 30ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರ ಖಂಡಗಳು ಪಂದ್ಯಾವಳಿಗೆ ಆಗಮಿಸಿದ್ದು ಈಗಾಗಲೇ ಉದ್ಘಾಟನೆಗೊಂಡು ಪಂದ್ಯಾವಳಿಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಈ ಪಂದ್ಯಾವಳಿಗಳಲ್ಲಿ ವಿಜೇತರಾದವರಿಗೆ ಪುರುಷ ಮತ್ತು ಮಹಿಳೆಯರ ತಂಡಗಳಿಗೆ ಸಮಾನವಾಗಿ ನಾಲ್ಕು ಹಂತದಲ್ಲಿ ಬಹುಮಾನವನ್ನು ವಿತರಿಸಲಾಗುವುದು ಎಂದರು.

ಪ್ರತಿ ವರ್ಷವೂ ನಮ್ಮ ವಿದ್ಯಾ ಸಂಸ್ಥೆಯಿಂದ ನಡೆಯುವ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಮುಸ್ಲಿಂ ಮುಖಂಡರಾದ ಹಸೀಬ್ ಉಲ್ಲ ಅವರು ಬಹುಮಾನಗಳ ಪ್ರಯೋಜಕರಾಗಿದ್ದು ಈ ಬಾರಿಯೂ ಕೂಡ ನಾಲ್ಕು ಹಂತದಲ್ಲಿ ನೀಡುವ ಬಹುಮಾನಗಳ ಪ್ರಯೋಜಕತ್ವವನ್ನು ವಹಿಸಿಕೊಂಡಿದ್ದಾರೆ ಇದರ ಜೊತೆಗೆ ಇಂದಿನ ಯುವಕರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಯಶಸ್ಸು ಕಂಡಾಗ ಕೇಂದ್ರ ಹಾಗೂ ರಾಜ್ಯಮಟ್ಟದ ಸರ್ಕಾರಿ ಕೆಲಸಗಳಲ್ಲಿ ಕ್ರೀಡಾ ಕೋಟಾದ ಅಡಿಯಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಬಹುದಾಗಿದ್ದು ಹೀಗಾಗಿ ಯುವಕರು ಕೇವಲ ಮೊಬೈಲ್ ದಾಸತ್ಯಕ್ಕೆ ಒಳಗಾಗದೆ ಕ್ರೀಡೆಗೆ ಹೆಚ್ಚು ಹೊತ್ತು ನೀಡಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.